ಅಮರ್ಚಂದ್ ಜೈನ್ ಅರ್ಪಿಸುವ, ಓಂಶಾಂತಿವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕಾಂಚನ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರದಲ್ಲಿ ಎ ಅರ್ಹತಾಪತ್ರವನ್ನು ನೀಡಿತ್ತು. ಚಿತ್ರತಂಡ ರಿವೈಸಿಂಗ್ ಕಮಿಟಿಗೆ ಮೊರೆ ಹೋಗಿತ್ತು. ಚಿತ್ರವನ್ನು ವೀಕ್ಷಿಸಿದ ರಿವೈಸಿಂಗ್ ಕಮಿಟಿ ಕೂಡ ಎ ಅರ್ಹತಾಪತ್ರವನ್ನೇ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಚಿತ್ರದ ನಿರ್ಮಾಪಕರಾಗಿರುವ ವಿಜಯ್ ಸುರಾನ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದ ಎರಡು ಹಾಡುಗಳನ್ನು ಶೇಷಗಿರಿ ಹಾಗೂ ಸಂತೋಷ್ ಬರೆದಿದ್ದಾರೆ. ಎಂ.ಎಸ್.ಮಾರುತಿ ಸಂಗೀತ ನೀಡಿದ್ದಾರೆ. ಶಂಕರ್ ಛಾಯಾಗ್ರಹಣ, ಜೀವನ್ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ರಾಹುಲ್(ಹೊಸ ಪರಿಚಯ), ರೂಪನಟರಾಜ್, ಹೇಮಂತ್, ಹನುಮಂತೇಗೌಡ, ವಿಜಯ್ಚಂಡೂರ್, ಗೀತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.